ಭಾನುವಾರ, ಡಿಸೆಂಬರ್ 13, 2009

ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..



ಶಂಶೀರ್ ಬುಡೋಳಿ.ಇದು ಈಗ ಕರ್ನಾಟಕದ ಮಾಧ್ಯಮ ಲೋಕದಲ್ಲಿ ಚಿರಪರಿಚಿತ ಹೆಸರು .ಈಗ ಇವರು ವಾರ್ತಾಭಾರತಿ ಕನ್ನಡ ದೈನಿಕದ ಉಪಸಂಪಾದಕ. ಜೊತೆಗೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ(M.C.J)ಯನ್ನು ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಮಾಡುತಿದ್ದಾರೆ. ಹಾಗೆಯೇ ಮಂಗಳೂರಿನ ಖಾಸಗಿ ವಾಹಿನಿ ‘ಚಾನೆಲ್೯’ನ ನ್ಯೂಸ್ ರೀಡರ್. ವಿವಿಧ ಸಾಮಾಜಿಕ, ಸಾಹಿತ್ಯ ಸಂಘಟನೆಗಳಲ್ಲಿ ಗುರುತಿಸುವಿಕೆ. ೧೧ನೇ ಮಂಗಳೂರು ವಿ.ವಿ.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. ಮರೀಚಿಕೆ ಪೋಟೊ ಕಾಮಿಕ್ಸ್‌ನಲ್ಲಿ ನಟನಾಗಿ ಅಭಿನಯ.ಕಲಾಸತ್ಯ ಪಾಕ್ಷಿಕ, ಪ್ರಸ್ತುತ ಪಾಕ್ಷಿಕದಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುವಿಕೆ. ವಿವಿಧ ಬಹುಮಾನ, ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ.



೨೦೦೮ ನೇ ಸಾಲಿನಲ್ಲಿ ಎಸ್.ಡಿ.ಎಂ ಕಾಲೇಜಿನ ಅತ್ತ್ಯುತ್ತಮ ವಿಧ್ಯಾರ್ಥಿ ಪ್ರಶಸ್ತಿ ಪಡೆದಿರುವ ಇವರು ರಾಷ್ಟ ಮಟ್ಟದ ವಿಚಾರಗೋಷ್ಠಿಯಲ್ಲಿ ಬಾಗವಹಿಸಿದ್ದಾರೆ.ಇವರ ಪ್ರಕಾರ ಇವರು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇಟ್ಟುಕೊಂಡು ಇವರೆಗೆ ಬಂದಂತಹ ಹಾದಿ,ಸೋಲು-ಗೆಲುವಿನ ಹಾದಿ. ಈ ಹಾದಿಯೊಳಗೆ ನಾನು ಬರೆಹದ ಮೂಲಕ ಜನರಿಗೆ ಪರಿಚಯವಾಗುವ ಜೊತೆಗೆ ನನ್ನನ್ನು ಪತ್ರಕರ್ತನಾಗುವಂತೆ ಪ್ರೇರೆಪಿಸಿದ ಊರ ಜನತೆ, ಅಭಿಮಾನಿಗಳ,ಗುರುವರ್ಯರ, ಕುಟುಂಬಿಕರ ಆಶಯ ನನ್ನನ್ನು ಈವರೆಗೆ ಬೆಳೆಸಲು ಕಾರಣ. ಇವರೆಲ್ಲರಿಗೂ ನಾನು ಎಂದೆಂದೂ ಚಿರಋಣಿ ಎನ್ನುತ್ತಾರೆ. ಜೊತೆಗೆ ನಾನು ನನ್ನಷ್ಟಕ್ಕೆ ತಾನು ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿ ಏನನ್ನಾದರೂ ಸಾಧಿಸುವ ಛಲ, ಇರಾದೆ ನನ್ನದು. ಇವರೆಗೆ ನಾನು ಅನುಭವಿಸಿದರಲ್ಲಿ ಹೆಚ್ಚಿನವು ಸೋಲುಗಳೇ.ಈ ಸೋಲುಗಳೇ ನನ್ನನ್ನು ಬೆಳೆಸುತ್ತಿದೆ ಎನ್ನುವ ಇವರು ಸಮಾಜದಲ್ಲಿನ ವಿರೋಧಾಭಾಸಗಳನ್ನು ವಿರೋಧಿಸುವ, ಪತ್ರಕರ್ತನಾಗಿ ನಾನು ಬರೆದ ಬರೆಹಗಳ ಮೂಲಕ ನನ್ನವರ,ನನ್ನ ರಾಜ್ಯದ, ದೇಶದ ಒಡಲಿನ, ಧಾರ್ಮಿಕತೆ ಹಾಗೂ ಬಡವ, ದಲಿತ,ಅಸ್ಪಶ್ಯರ, ಶೋಷಿತರ ಪರ ಧ್ವನಿಯಾಗಲು ಬಯಸುತ್ತೇನೆ ಎನ್ನುತ್ತಾರೆ. ಇವರು ತಮ್ಮ ಬರವಣಿಗೆಗಳಿಗಾಗಿ http://www.shamsheerbudoli.blogspot.com ಎಂಬ ಬ್ಲಾಗ್ ಒಂದನ್ನು ತೆರೆದಿದ್ದು ಅಲ್ಲಿ ಇವರ ಬರಹಗಳನ್ನು ನೋಡಬಹುದು.



- ಅಶ್ರಫ್ ಮಂಜ್ರಾಬಾದ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ