ಭಾನುವಾರ, ಡಿಸೆಂಬರ್ 13, 2009

ಹಿಂದಿ ಅನುವಾದಿತ ಕನ್ನಡ ಶಾಯರಿಗಳು...

ಕಣ್ಣೀರಿನ ಪ್ರಶ್ನೆ

ಒಂದು ದಿನ ನನ್ನ ಕಣ್ಣೀರು ನನ್ನನ್ನೇ ಕೇಳಿತು
ಪ್ರತಿದಿನ ನೀನು ನನ್ನನ್ನು ಏಕೆ ಕರೆಯುತ್ತೀಯಾ..?
ನಾನು ಹೇಳಿಯೇ ಬಿಟ್ಟೆ
ಪ್ರತಿದಿನ ನಾನು ಅವಳ ನೆನಪು ಮಾತ್ರ ಮಾಡುತ್ತೇನೆ,
ಆಗ ಕರೆಯದೆ ನೀನೇ ಏಕೆ ಬಂದು ಬಿಡುತ್ತೀಯಾ..?



ನನ್ನ ಹೃದಯ

ಅವಳ ಸವಿನೆನಪಿನೊಂದಿಗೆ ನನ್ನ ಹೃದಯವನ್ನು
ಹೇಗೆ ನಾ ಉಲ್ಲಸಿತಗೊಳಿಸಲಿ.....
ಯಾರನ್ನು ನಾ ಮರೆತೇ ಇಲ್ಲವೋ
ಅವಳ ನೆನಪನ್ನು ಪುನಃ ನಾ ಹೇಗೆ ಮಾಡಲಿ...
ನನ್ನ ಹೃದಯವನ್ನು ನನ್ನವಳೇ
ಘಾಸಿಗೊಳಿಸಿದಳು,
ಹೀಗಿರುವಾಗ ಇದರ ಬಗ್ಗೆ ಪರರಲ್ಲಿ
ನಾ ಏನೆಂದು ದೂರು ನೀಡಲಿ....



ಪ್ರೀತಿ ಎಂಬ ಮಾಯೆ

ಯಾರ ಮೇಲೆ ಪ್ರೀತಿ ಇತ್ತೋ
ಆ ಹುಡುಗಿ ನನ್ನವಳಾಗಲಿಲ್ಲ,
ಯಾವ ಕ್ಷಣಕ್ಕಾಗಿ ದಿನರಾತ್ರಿ ಕಾದೆನೋ
ಆ ಕ್ಷಣವೂ ನನ್ನದಾಗಲಿಲ್ಲ,
ಪ್ರೀತಿ ಎಂಬ ಈ ಪದ ಒಂದು
ಮಾಯೆಯೇ ಇರಬೇಕು
ಅವಳಿಗೆ ನಾನು ಸಿಗಲಿಲ್ಲ
ನನಗೆ ಯಾರೂ ಸಿಗಲಿಲ್ಲ...



ಭರವಸೆ

ಗೆಳೆತನದ ಹೂವು ಎಲ್ಲಾ
ಕಾಲದಲ್ಲೂ ಅರಳುತ್ತದೆ,
ಸ್ನೇಹದ ಮೋಡಗಳು ಎಲ್ಲಾ
ಕಾಲದಲ್ಲೂ ಘರ್ಜಿಸುತ್ತದೆ,
ನೀನು ನನ್ನನ್ನು ಪ್ರೀತಿಸು
ಇಲ್ಲವೇ ಪ್ರೀತಿಸದಿರು
ಇದು ಮಾತ್ರ ಸತ್ಯ
ಎಲ್ಲಾ ಕಾಲದಲ್ಲೂ
ನಿನ್ನ ನೆನಪುಗಳ ನಡುವೆಯೇ
ನನಗೆ ಬದುಕಲು ಬರುತ್ತದೆ....



ಆತ್ಮ ವಿಶ್ವಾಸ

ಒಡೆದು ಹೋದ ಕನಸುಗಳನ್ನು
ಪುನಃ ಮರಳಿ ಕಟ್ಟಲು ಬರುತ್ತದೆ,
ಮುನಿಸಿ ಹೋದ ಹೃದಯವನ್ನು
ಪುನಃ ಒಲಿಸಿಕೊಳ್ಳಲೂ ಬರುತ್ತದೆ,
ನೀನು ನನ್ನ ಯಾತನೆ ನೋಡಿ
ಕೊರಗಬೇಡ,
ಯಾತನೆಯ ನಡುವೆಯೂ ನನಗೆ
ಮುಗುಳ್ನಗಳು ಬರುತ್ತದೆ.......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ