ಶುಕ್ರವಾರ, ಮೇ 28, 2010

ಮರುಭೂಮಿಯ ನಡುವಿನಲ್ಲಿ ಕನ್ನಡಿಗನ ಸಾಹಿತ್ಯ ಪ್ರೇಮ ..


ಶ್ರೀ ಎಜಾಸುದ್ದೀನ್. ವಿಶ್ವ ಕನ್ನಡಿಗರ ಒಕ್ಕೂಟದ ಸಕ್ರಿಯ ಸದಸ್ಯ ಮತ್ತು ಉತ್ತಮ ಬರಹಗಾರ ಕೂಡ. ಇವರು ಮೂಲತಃ ಮಂಗಳೂರಿನವರು. ಇವರ ಮಾತೃಭಾಷೆ ಬ್ಯಾರಿ, ಇವರ ಕನ್ನಡದ ಜ್ಞಾನ ಹೈಸ್ಕೂಲು ವರೆಗಿನದ್ದು , ಅರಬೀ ಬಾಷೆಯಲ್ಲಿ ಪದವೀಧರ. ಜೊತೆಗೆ ಉರ್ದು ಭಾಷೆಯಲ್ಲಿ ಉತ್ತಮ ಪಾಂಡಿತ್ಯವನ್ನೂ ಹೊಂದಿದ್ದಾರೆ. ಇವರ ಪ್ರಕಾರ ಕನ್ನಡದ ಜೊತೆಗೆ ಉರ್ದು ಸಹ ಇವರ ಇಷ್ಟದ ಭಾಷೆ.ಉದ್ಯೋಗ ನಿಮಿತ್ತ ಈಗ ಕುವೈತಿನಲ್ಲಿ ನೆಲೆಸಿರುವ ಇವರು ಕುವೈತಿನಿಂದ ಹೊರಡುವ ಒಂದು ಉರ್ದು ಮಾಸಿಕದ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸುತಿದ್ದಾರೆ.




ಇವರು ಹೇಳಿಕೊಳ್ಳುವಂತೆ ಇವರಿಗೆ ಹೆಚ್ಚಾಗಿ ಕನ್ನಡದಲ್ಲಿ ಬರೆಯುವ ಅನುಭವವಿಲ್ಲ .ತೀರಾ ಇತ್ತೀಚೆಗಷ್ಟೇ ಕನ್ನಡದಲ್ಲಿ ಬರೆಯಲಾರಂಭಿಸಿದ್ದು ಅದೂ ಸುಮಾರು ಇಪ್ಪತ್ತು ವರ್ಷಗಳ ವಿಯೋಗದ ಬಳಿಕ ಎಂದು ಹೇಳುವ ಇವರ ಕನ್ನಡ ಬರಹ ಮತ್ತು ಅದರಲ್ಲಿರುವ ಬರವಣಿಗೆಯ ಶೈಲಿಯನ್ನು ನೋಡಿದರೆ ನಿಜಕ್ಕೂ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಜ್ಞಾನದ ಬೆಳಕಿನಲ್ಲಿ ಅಜ್ಞಾನದ ಕತ್ತಲನ್ನು ದೂರಮಾಡಿ ಒಂದು ಆರೋಗ್ಯಪೂರ್ಣ ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ನನ್ನದೂ ಪಾಲು ಇರಲಿ ಎಂಬ ಉದ್ದೇಶದೊಂದಿಗೆ ಇವರು ದೂತ ಎಂಬ ಬ್ಲಾಗ್ ಒಂದನ್ನು ರಚಿಸಿದ್ದಾರೆ . ಇಂತಹ ಒಂದು ಕನ್ನಡ ಸಾಹಿತ್ಯ ಪ್ರೇಮಿ ನಮ್ಮ ಒಕ್ಕೂಟದ ಸದಸ್ಯನಾಗಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ.ಇವರ ಬರಹಗಳನ್ನು ಓದಲು ಇವರ ಬ್ಲಾಗ್ http://ipcblogger.net/ijaz/ ಗೆ ಭೇಟಿ ಕೊಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ